ಕೈ ಕಾಲು ಹುಳುಕಿದರೆ ಹುಣಸೆ ಹಣ್ಣನ್ನು ಬಳಸಿ ಈ ರೀತಿ ಮಾಡಿದರೆ ನೋವು ಕ್ಷಣದಲ್ಲಿ ಮಾಯವಾಗುತ್ತದೆ..!!

0
9621

ಸಾಮಾನ್ಯವಾಗಿ ಕಾಲು ಕೈಗಳು ಹುಳುಕಿದರೆ ಇವುಗಳ ನೋವು ಅಂತಿಂತದ್ದಲ್ಲ, ನೋವು ಕಡಿಮೆ ಮಾಡಿಕೊಳ್ಳಲು ಬಹಳ ಕಷ್ಟ ಪಡುತ್ತೇವೆ, ಹಾಗು ಬಹಳ ದಿನಗಳ ವರೆಗೂ ನೋವನ್ನು ನುಂಗುತ್ತೇವೆ, ಕೊನೆಗೆ ವೈದ್ಯರ ಬಳಿ ಹೋದರೆ ಅವರು ಪಟ್ಟಿ ಕಟ್ಟಿ ಕೆಲವು ದಿನ ಹಾಗೆ ಬಿಡಲು ಹೇಳುತ್ತಾರೆ ನಂತ್ರ ನೋವು ಕಡಿಮೆ ಆಗಬಹುದು ಅಥವಾ ಅಗದೆನೆ ಇರಬಹುದು, ಆದರೆ ನಾವು ಇಂದು ಇಲ್ಲಿ ನಿಮಗೆ ತಿಳಿಯೋಸಿಕೊಡುತ್ತಿರುವ ಮನೆ ಮದ್ದನ್ನಾ ಬಳಸಿದರೆ ಕಾಡುವ ನಿಮ್ಮ ಹುಳುಕು ಬೇಗ ಮಾಯವಾಗುತ್ತದೆ.

ಬೆಲ್ಲವನ್ನು ಹಳೆಯ ಹುಣಸೆ ಹಣ್ಣಿನೊಂದಿಗೆ ಬಿಸಿ ಮಾಡಿ, ಉಳುಕಿದ್ದ ಜಾಗಕ್ಕೆ ಕಾವು ಕೊಟ್ಟರೆ ನೋವು ಕಡಿಮೆ ಆಗುವುದಲ್ಲದೆ ಬೇರ್ಪಟ್ಟ ಕೀಲುಗಳು ಸರಿಜಾಗದಲ್ಲಿ ಸೇರುವವು.

ಬೆಲ್ಲವನ್ನು ತುಪ್ಪಕ್ಕೆ ಹಾಕಿ ಬಿಸಿ ಮಾಡಿ, ಉಳುಕಿರುವ ಜಾಗದಲ್ಲಿ ಲೇಪಿಸುವುದರಿಂದ ನೋವು ಕಡಿಮೆ ಆಗುವುದು.

ಉಳುಕಿರುವ ಹಾಗೂ ಊದಿರುವ ಜಾಗಕ್ಕೆ ಬಿಸಿ ನೀರಿನಿಂದ ಕಾವು ಕೊಡುವುದರಿಂದ ನೋವು ಕಡಿಮೆ ಆಗುವುದು, ಊತವು ಇಳಿಯುವುದು.

ಬಿಸಿ ಮಡಿದ ಹುಣಸೆ ಗೊಜ್ಜನ್ನು ಉಳುಕಿರುವ ಹಾಗೂ ಊತ ಇರುವ ಭಾಗದ ಮೇಲೆ ಲೇಪಿಸುವುದರಿಂದ ನೋವು ಕಡಿಮೆ ಆಗುವುದು.

ಉಳುಕಿದ ತಕ್ಷಣ ಹರಳೆಣ್ಣೆ ಹಾಕಿ ನಿಧಾನವಾಗಿ ಮಸಾಜ್ ಮಾಡಬೇಕು. ಬೆಳಗ್ಗೆ ಎದ್ದ ಕೂಡಲೇ ಎಣ್ಣೆ ಹಾಕಿ ಮಸಾಜ್ ಮಾಡಿದರೆ ನೋವು ಕಡಿಮೆಯಾಗುವುದು.

ಜೊತೆಯಲ್ಲಿ ಇದನ್ನು ಓದಿ ಪ್ರತಿ ದಿನ ಒಂದು ಖರ್ಜುರ ತಿನ್ನುವುದರಿಂದ ಎಷ್ಟೆಲ್ಲಾ ಲಾಭವಾಗುತ್ತೆ ಗೊತ್ತಾ.

ಎಲ್ಲ ಕಾಲಮಾನದಲ್ಲೂ ಸುಲಭವಾಗಿ ದೊರೆಯುವ ಖರ್ಜುರವನ್ನು ನಿತ್ಯ ಒಂದೆರಡು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ಏಕೆಂದರೆ ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ರಕ್ತಹೀನತೆ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಅಸಿಡಿಟಿ ಮತ್ತು ಎದೆ ಉರಿ ಇದ್ದಾರೆ ಒಂದು ಖರ್ಜುರ ತಿಂದರೆ ಸಾಕು ಕಡಿಮೆಯಾಗುತ್ತದೆ. ಇದರಲ್ಲಿ ವಿಟಮಿನ್, ಕನಿಜಾಂಶಗಳು ಹೇರಳವಾಗಿರುವುದರಿಂದ ಕೆಲವು ಪ್ರಮುಖ ಕಾಯಿಲೆಗಳ ನಿವಾರಣೆಗೆ ಸಹಾಯ ಮಾಡುತ್ತದೆ.

ಹೃದ್ರೋಗ ಸಮಸ್ಯೆ ಕಡಿಮೆ ಮಾಡಲು ಖರ್ಜುರವನ್ನು ರಾತ್ರಿಯಲ್ಲಿ ನೀರಿನಲ್ಲಿ ನೆನೆಹಾಕಿ ಬೆಳಗ್ಗೆ ಅದನ್ನು ಜ್ಯೂಸ್ ರೀತಿ ಮಾಡಿ ಕುಡಿದರೆ ತುಂಬಾ ಒಳ್ಳೆಯದು. ಗರ್ಭಿಣಿಯಾದಾಗ ಕೆಲವರಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆ ಇದ್ದಾರೆ ಖರ್ಜುರ ತಿಂದರೆ ಸಾಕು, ದೇಹದಲ್ಲಿ ರಕ್ತಕಣಗಳು ಹೆಚ್ಚಾಗಿ ಅರೋಗ್ಯ ವೃದ್ಧಿಸುವುದಲ್ಲದೆ ಬೃನದ ಬೆಳವಣಿಗೆಗೆ ಸಹಕಾರಿಯಾಗುತ್ತದೆ, ಹೆರಿಗೆಯಾ ನಂತರ ಎದೆಯಲ್ಲಿ ಹಾಲು ಹೆಚ್ಚು ಉತ್ಪತ್ತಿ ಮಾಡುತ್ತದೆ ಈ ಖರ್ಜುರ.

ಖರ್ಜುರ ಹಾಕಿ ಕಾಯಿಸಿದ ಹಾಲಿನಿಂದ ಮಕ್ಕಳಿಗೆ ಪೋಷಕಾಂಶ ಸಿಗುವುದು. ಮಲಬದ್ಧತೆ ಸಮಸ್ಯೆಯಿದ್ದರೆ ರಾತ್ರಿ ನೀರಿನಲ್ಲಿ ನೆನೆ ಹಾಕಿ ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು. ಖರ್ಜುರದಲ್ಲಿ ಎ ವಿಟಮಿನ್ ಇರುವುದರಿಂದ ಇರುಳು ಕುರುಡು ಸಮಸ್ಯೆ ನಿವಾರಣೆಯಾಗುತ್ತದೆ, ಸಂಧಿ ನೋವು ಹೆಚ್ಚಿನವರಲ್ಲಿ ಕಂಡುಬರುವ ಸಮಸ್ಯೆ. ಮೂಲೆಯಲ್ಲಿ ಕ್ಯಾಲ್ಸಿಯಂ ಅಂಶ ಕಡಿಮೆ ಇರುವುದರಿಂದ ಹೀಗಾಗುವುದು. ಖರ್ಜುರದಲ್ಲಿ ಕ್ಯಾಲ್ಸಿಯಂ ಇರುವುದರಿಂದ ಮೂಳೆಗಳ ಆರೋಗ್ಯವನ್ನು ವೃದ್ಧಿಸುವುದು. ಕಾರ್ಜುರಗಳು ಪ್ರೊಟೀನ್ ಗಳ ಅಗರವಾಗಿವೆ. ಹೀಗಾಗಿ ಇವುಗಳನ್ನು ಪ್ರತಿನಿತ್ಯ ಸೇವಿಸುವುದರಿಂದ ನಮ್ಮ ದೇಹವನ್ನು ಕಾಪಾಡಿಕೊಳ್ಳಬಹುದು.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here