ಕಳ್ಳತನ, ವಂಚನೆ ಎಷ್ಟು ಕೆಟ್ಟದ್ದು ಎಂಬುದಕ್ಕೆ ಈ ಕಥೆ ಒಂದು ಒಳ್ಳೆಯ ಉದಾಹರಣೆ. ತಪ್ಪದೇ ಓದಿ.

0
2937

ಕಳ್ಳತನ, ವಂಚನೆ ಎಷ್ಟು ಕೆಟ್ಟದ್ದು ಎಂಬುದಕ್ಕೆ ಈ ಕಥೆ ಒಂದು ಒಳ್ಳೆಯ ಉದಾಹರಣೆ. ಇಬ್ಬರು ದ’ರೋಡೆಕೋರರಿಂದ ಬ್ಯಾಂಕ್ ಒಂದರಲ್ಲಿ ದ’ರೋಡೆ ನಡೆದಿತ್ತು. ಒಬ್ಬ ದ’ರೊಡೆಕೋರ ಕೂಗಿ ಹೇಳಿದ. ಯಾರೊಬ್ರೂ ಒಂದು ಚೂರೂ ಅಲ್ಲಾಡಬೇಡಿ. ನಿಂತಲ್ಲೇ ನಿಲ್ಲಿ. ಈ ಹಣ ಹೋದ್ರೆ ಸರ್ಕಾರದ್ದು ಹೋಗುತ್ತೆ. ಆದ್ರೆ ಜೀವ ಹೋದ್ರೆ ನಿಮ್ಮ ಸ್ವಂತದ್ದು. ಹು’ಷಾರ್. (ಇದನ್ನು ಮ್ಯಾನೇಜ್ಮೆಂಟ್ ನಲ್ಲಿ ಮೈಂಡ್ ಚೇಂಜಿಂಗ್ ಕಾನ್ಸೆಪ್ಟ್ ಎನ್ನುತ್ತಾರೆ. ಅಂದ್ರೆ, ಯೋಚಿಸುವ ರೀತಿಯಲ್ಲಿ ವಿಶೇಷತೆ)

ಎಲ್ಲರೂ ಸುಮ್ಮನೆ ಬಗ್ಗಿ ಕುಳಿತುಕೊಂಡರು. ಒಬ್ಬ ಮಹಿಳೆ ಮಾತ್ರ ಅವರ ಮಾತು ಕೇಳದೇ ಮುಂದೆ ಬರಲು ಯತ್ನಿಸಿದಳು. ಆಗ ಆ ದ’ರೊಡೆಕೋರ ಹೇಳಿದ ಸರಿಯಾಗಿ ನಾನು ಹೇಳಿದಂತೆ ನಡೆದುಕೊ. ಇಲ್ಲಿ ದ’ರೋಡೆ ನಡೆಯುತ್ತಿದೆ ರೇ’ಪ್ ಅಲ್ಲ. (ಇದನ್ನು ಬೀಯಿಂಗ್ ಪ್ರೊಫೆಷನಲ್ ಅಂತಾರೆ. ಅಂದರೆ ಮಾಡಬೇಕಾದ ಕೆಲಸದ ಮೇಲೆ ಮಾತ್ರ ಗಮನ ಹರಿಸುವುದು. ಬೇರೆ ಪ್ರಚೋದನೆಗೆ ಒಳಗಾಗದಿರುವುದು.)

ದ’ರೋಡೆ ಮುಗಿಸಿ ಹಣದೊಂದಿಗೆ ಮನೆಗೆ ಮರಳಿದಾಗ ಏನೂ ಓದದ ಸಣ್ಣ ಕಳ್ಳ ಹೆಚ್ಚು ಓದಿದ್ದ ದೊಡ್ಡ ಕಳ್ಳನಿಗೆ, ಕದ್ದ ಹಣ ಎಷ್ಟಿದೆ ಅಂತ ಎಣಿಸೋಣ ಅಂದ. ಅದಕ್ಕೆ ದೊಡ್ಡ ಕಳ್ಳ (6 ನೆ ಕ್ಲಾಸ್ ಓದಿದ್ದ) ಹೇಳಿದ ಇಷ್ಟೊಂದು ದುಡ್ಡು ಎಣಿಸೋಕೆ ಪೂರ್ತಿ ದಿನ ಬೇಕು. ಅದರ ಬದಲು ನ್ಯೂಸ್ ನೋಡಿದ್ರೆ ಅವ್ರೇ ಹೇಳ್ತಾರೆ ಬಿಡು. ಎಷ್ಟಿದೆ ಅಂತ ಅಂದ. (ಇದು ಅನುಭವ ಈಗಿನ ಕಾಲಕ್ಕೆ ಅಗತ್ಯವಾಗಿರುವ ಗುಣ.)

ಇದಾದ ನಂತರ ಬ್ಯಾಂಕ್ ಮ್ಯಾನೇಜರ್ ಸೂಪರ್’ವೈಸರ್ ಗೆ ಹೇಳಿದ ಪೊಲೀಸ್ ಗೆ ಫೋನ್ ಮಾಡೋಣ ಅಂತ. ಆಗ ಸೂಪರ್’ವೈಸರ್ ಹೇಳಿದ ತಡೆಯಿರಿ. ಅದಕ್ಕೂ ಮೊದಲು ನಾವು ಈಗಾಗಲೇ ಸ್ವಂತಕ್ಕೆ 70 ಲಕ್ಷ ಬಳಸಿಕೊಂಡಿದ್ದೇವೆ ಅದರ ಜೊತೆ ಇನ್ನೂ 10 ಲಕ್ಷ ತೆಗೆದುಕೊಂಡು ಅಮೇಲೇ ಪೊಲೀಸ್ ಕರೆಸಿದ್ರೆ ಒಳ್ಳೆಯದು ಅಲ್ವೇ ಅಂದ.

(ಇದನ್ನು ಸ್ವಿಮ್ ವಿಥ್ ದ ಟೈಡ್, ಅಂದ್ರೆ ಅಲೆಯ ದಿಕ್ಕಿನಲ್ಲಿ ಈಜುವುದು ಅಂತ ಹೇಳ್ತಾರೆ. ಎಂತಹದೇ ಕೆಟ್ಟ ಪರಿಸ್ಥಿತಿಗಳನ್ನೂ ನಮ್ಮ ಅನುಕೂಲವಾಗುವಂತೆ ಪರಿವರ್ತಿಸುವುದು ಅಂತ.) ಮರುದಿನ ಎಲ್ಲಾ ನ್ಯೂಸ್ ಚಾನಲ್ ನಲ್ಲಿ ಬ್ರೇಕಿಂಗ್ ನ್ಯೂಸ್ “ಬ್ಯಾಂಕಿನಿಂದ 1 ಕೋಟಿ ರೂಪಾಯಿ ಹಣ ದರೋಡೆ” ಅಂತ ಸುದ್ದಿ.

ಕಳ್ಳರು ಗಾಬರಿಯಿಂದ 10 ಸಾರಿ ಎಣಿಸಿದರೂ ಇದ್ದಿದ್ದು 20 ಲಕ್ಷ ಮಾತ್ರ. ಅವರಿಗೆ ಅರಿವಾಗಿದ್ದೇನಂದ್ರೆ ನಾವು ಪ್ರಾಣ ಪಣಕ್ಕಿಟ್ಟು 20 ಲಕ್ಷ ಕದ್ದೆವು. ಆದ್ರೆ ಬ್ಯಾಂಕ್ ಮ್ಯಾನೇಜರ್ ಮತ್ತು ಸೂಪರ್’ವೈಸರ್ ಏನೂ ಕಷ್ಟ ಪಡದೆ 80 ಲಕ್ಷ ಗಳಿಸಿದರು. ಇಲ್ಲಿ ಕಳ್ಳರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಯಿತು. ಸಿಕ್ಕಿಬಿದ್ದಾಗ ಅವರಿಗಾಗುವ ಅವಮಾನ ನಷ್ಟ ಶಿಕ್ಷೆಗಳನ್ನು ಒಮ್ಮೆ ಯೋಚಿಸಿ ನೋಡಿ.

ಒಬ್ಬ ಕಳ್ಳನಾಗುವುದಕ್ಕಿಂತ ಎಜುಕೇಟೆಡ್ ಆಗಿದ್ದು ಬಂದ ಅವಕಾಶವನ್ನು ಹೀಗೆ ಉಪಯೋಗುಸಿಕೊಳ್ಳಬೇಕು ಎಂದು ಅರಿತು ಮುಂದಿನ ಹೆಜ್ಜೆ ಇಡುವುದು ಉತ್ತಮ ಆಯ್ಕೆ. ನಾಲೆಡ್ಜ್ ಈಸ್ ಆಸ್ ವರ್ತ್ ಆಸ್ ಗೋಲ್ಡ್ ಅನ್ನೋದು ಎಷ್ಟು ಸತ್ಯ ಅಲ್ವಾ. ಈ ಪ್ರಪಂಚದಲ್ಲಿ ಜ್ಞಾನಕ್ಕಿಂತ ಬೆಲೆ ಬಾಳುವ ಶಕ್ತಿ ಯಾವುದೂ ಇಲ್ಲ. ಹೌದು ತಾನೇ ಸ್ನೇಹಿತರೇ. ಆದರೆ ನಮ್ಮ ಜ್ಞಾನವನ್ನು ನಾವು ಕೆಟ್ಟ ಕೆಲಸಗಳಿಗೆ ಬಳಸಿಕೊಳ್ಳಬಾರದು. ಅದನ್ನು ಒಳ್ಳೆಯ ಕಾರ್ಯಗಳಿಗೆ ಸಮರ್ಪಿಸಬೇಕು.

ಚಿನ್ನ ಸಂಪತ್ತು ನಿಮ್ಮ ಬಳಿ ಇದ್ದರೆ ಅದು ಕಳುವಾಗುವ ಸಾಧ್ಯತೆ ಇದೆ. ಆದರೆ ನಿಮ್ಮ ಬಳಿ ಜ್ಞಾನ ಇದ್ದರೆ ಅದನ್ನು ಯಾರಿಂದಲೂ ಕಳೆದುಕೊಳ್ಳಲು ಸಾಧ್ಯವಿಲ್ಲ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ. ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here