ಹೆಂಗಸರಿಗೆ ಋತುಸ್ರಾವದ ಸಮಯದಲ್ಲಿ ದೇವಸ್ಥಾನದ ಒಳಗಡೆ ಪ್ರವೇಶ ಕೊಡುವುದಿಲ್ಲ ಏಕೆ..?

0
3388

ಭಾವನಾತ್ಮಕತೆ : ನಮ್ಮ ಸಂಪ್ರದಾಯದಲ್ಲಿ ಸ್ತ್ರೀ ಋತುಸ್ರಾವದ ಸಮಯದಲ್ಲಿ ದೇವಸ್ಥಾನಗಳಿಗೆ ಹೋಗಬಾರದು ಎಂಬ ನಿಯಮ ಇದೆ, ಈ ರೀತಿ ಮಾಡುವುದು ಸ್ತ್ರೀಗೆ ಅವಮಾನ ಪಡಿಸಲಾಗಿದೆ ಎಂದು ಭಾವಿಸಬಾರದು, ದೈವಿಕ ಮತ್ತು ವಾಸ್ತವಿಕ ಅಂಶಗಳನ್ನು ಚರ್ಚೆ ಮಾಡುವುದರಿಂದ ನಮಗೆ ನಿಜ ಸಂಗತಿ ಅರಿವಾಗುತ್ತದೆ, ಆಗ ನಾವು ಅರ್ಥಮಾಡಿಕೊಳ್ಳಬಹುದು.

ಸ್ತ್ರೀ ಋತುಸ್ರಾವದಲ್ಲಿ ಇರುವ ಸಮಯದಲ್ಲಿ ಮಾನಸಿಕವಾಗಿ ದುರ್ಬಲತೆ ಹೊಂದಿರುತ್ತಾರೆ, ಅದೇ ರೀತಿ ದೈಹಿಕ ಅಶುದ್ಧತೆ ಕಾಡುತ್ತದೆ, ಇಂತಹ ಸಮಯದಲ್ಲಿ ಮನಸ್ಸು ಬಲಹೀನವಾಗಿರುತ್ತದೆ, ಇಂತಹ ಪರಿಸ್ಥಿತಿಯಲ್ಲಿ ಸ್ತ್ರೀ ದೇವಸ್ಥಾನದ ಒಳಗೆ ಹೋಗುವುದು ಸೂಕ್ತ ಅಲ್ಲ ಮಾನಸಿಕ ಮೈಲಿಗೆ ಅಂದರೆ ಮನಸ್ಸು ದೇವಾಲಯದ ಒಳಗೆ ಹೋಗದೆ ಇರುವ ಸ್ಥಿತಿಯಲ್ಲಿ ಇರುತ್ತದೆ, ಈ ರೀತಿ ಮನಸ್ಸು ಬಲಹೀನತೆ ಇಂದ ಕೂಡಿರುವ ಸಮಯದಲ್ಲಿ ದ್ವಂದ್ವ ಕಾಡುತ್ತದೆ, ಮನಸ್ಸು ನಿರಾಳ ಇಲ್ಲದಿರುವ ಸಮಯದಲ್ಲಿ ಯಾವ ಕೆಲಸವೂ ಮಾಡಲು ಆಗುವುದಿಲ್ಲ.

ವೈಚಾರಿಕತೆ : ಸ್ತ್ರೀ ಪ್ರಕೃತಿ, ಅಂತಹ ಸ್ತ್ರೀ ಪ್ರಕೃತಿ ಹಾಳು ಮಾಡುವ ಕೆಲಸದಲ್ಲಿ ನಿರತಳಾಗಬಾರದು ಅಲ್ಲವೇ ?

ವಾಸ್ತವಿಕತೆ : ಋತುಸ್ರಾವದ ಸಮಯದಲ್ಲಿ ದೇಹದಲ್ಲಿ ಅಧಿಕ ಉಷ್ಣತೆ ಕಾಡುತ್ತದೆ, ಸ್ತ್ರೀಯರಲ್ಲಿ ಸ್ರಾವ ಆಗುತ್ತಿರುವ ಸಮಯದಲ್ಲಿ ಕೆಲವು ಕ್ರಿಮಿಕೀಟಗಳು ಆಗ ದೇಹದ ಸುತ್ತಲೂ ಹರಡಿಕೊಂಡಿರುತ್ತದೆ, ಹಿಂದಿನ ಕಾಲದಲ್ಲಿ ಮೂರು ದಿನಗಳ ಕಾಲ ಪ್ರತ್ಯೇಕವಾಗಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡುತ್ತಿದ್ದರು, ದೇವರ ವಿಗ್ರಹಗಳ ಬಳಿಗೆ ಹೋದರೆ ಅತಿಯಾದ ಉಷ್ಣತೆ ತಾಗಿ ವಿಗ್ರಹಗಳು ಹಾಳಾಗುತ್ತದೆ, ಹೊಲ ಮತ್ತು ಗದ್ದೆ ಮುಂತಾದ ಕಡೆ ಹೋಗಬಾರದು ಎಂದು ತಾಕೀತು ಮಾಡಲಾಗುತ್ತಿತ್ತು.

ಆ ರೀತಿ ಮಾಡಲು ಕಾರಣವೇನೆಂದರೆ ಆಕೆ ದೇಹದಲ್ಲಿರುವ ಅತಿ ಉಷ್ಣತೆ ತಗುಲಿ ಗಿಡಗಳು ಒಣಗಿ ಹೋಗುತ್ತಿತ್ತು, ಈ ರೀತಿ ನಮ್ಮ ಪ್ರಕೃತಿಗೆ ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದ ಸ್ತ್ರೀಯರು ಋತು ಸ್ರಾವದ ಸಮಯದಲ್ಲಿ ದೇವಸ್ಥಾನಗಳಿಗೆ ಹೋಗಬಾರದು ಎನ್ನುವ ನಿಯಮ ಮಾಡಲಾಗಿದೆ.

LEAVE A REPLY

Please enter your comment!
Please enter your name here