ಮನೆಯಲ್ಲೇ ಈ ರೀತಿ ಜಲಚಿಕಿತ್ಸೆಗಳನ್ನು ಮಾಡಿ ಹಲವು ಸಮಸ್ಯೆಗೆ ಪರಿಹಾರ ಪಡೆಯಬಹುದು..!!

0
2429

ನೀರಿನಿಂದಲೇ ಹಲವು ಕಾಲಿಗಳಿಗೆ ಚಿಕಿತ್ಸೆ ನೀಡಬಹುದು, ಅದರಲ್ಲೂ ಮನೆಯಲ್ಲೇ ನೀಡಬಹುದಾದಂತ ಕೆಲವು ಸಲಹೆಯನ್ನು ಇಂದು ನೀಡುತ್ತೇವೆ ಇದರಿಂದ ನಿಮಗೆ ಒಂದಲ್ಲಾ ಒಂದು ದಿನ ಉಪಯೋಗಕ್ಕೆ ಬಂದೆ ಬರುತ್ತದೆ.

ಹೆಚ್ಚು ಹೆಚ್ಚು ನೀರನ್ನು ಕುಡಿಯುವುದರಿಂದ ಉರಿಮೂತ್ರ ಕೊಂಚಮಟ್ಟಿಗೆ ಉಪಶಮನವಾಗುವುದು.

ದಿನ ನಿತ್ಯ ತಲೆಗೆ ತಣ್ಣೀರಿನ ಸ್ನಾನ ಮಾಡುವುದು ಮಾಡುವುದರಿಂದ ಕೂದಲು ಉದುರುವುದಿಲ್ಲ ಮತ್ತು ತಲೆಯಲ್ಲಿ ಹೊಟ್ಟು ಉಂಟಾಗುವುದಿಲ್ಲ.

ಏಟು ಬಿದ್ದು ಊದಿಕೊಂಡಿದ್ದರೆ ಬಿಸಿ ನೀರಿನ ಶಾಖ ಕೊಡುವುದರಿಂದ ಊತ ಕಡಿಮೆಯಾಗಿ ನೋವು ಸಹ ಉಪಶಮನವಾಗುತ್ತದೆ.

ವಿಪರೀತ ಜ್ವರದ ತಾಪ ಬಿದ್ದಾಗ ಹಣೆಯ ಮೇಲೆ ತಣ್ಣೀರಿನಿಂದ ನೆನೆಸಿದ ಬಟ್ಟೆಯನ್ನು ಹಾಕುತ್ತಿದ್ದರೆ ರೋಗಿಗೆ ಹಿತವೆನಿಸಿ ತಲೆನೋವು ದೂರವಾಗುವುದು.

ಪ್ರೇರಣೆಯಿಲ್ಲದೆ ವೀರ್ಯಪತನವಾಗುತ್ತಿದ್ದಲ್ಲಿ ಐಸ್ ನೀರಿನಲ್ಲಿ ಬಟ್ಟೆಯನ್ನು ನೆನೆಸಿ ಪಟ್ಟಿ ಕಟ್ಟುವುದರಿಂದ ಗುಣ ಕಂಡು ಬರುವುದು.

ಮೂಗಿನಿಂದ ರಕ್ತ ಹೊರ ಬರುತ್ತಿದ್ದಲ್ಲಿ ತಣ್ಣೀರಿನಿಂದ ನೆನೆಸಿದ ಬಟ್ಟೆಯನ್ನು ಮೂಗಿನ ಮೇಲೆ ಇಟ್ಟು ಕಣ್ಣೀರು ಹಾಕುತ್ತಿದ್ದಾರೆ ರಕ್ತ ಸುರಿಯುವುದು ನಿಂತು ಹೋಗುವುದು.

ಮೂರ್ಛೆ ಬಿದ್ದವರು ವ್ಯಕ್ತಿಗಳಿಗೆ ಹಣೆ, ಬೆನ್ನು, ಮೂಳೆ ಮತ್ತು ನೆತ್ತಿಯ ಮೇಲೆ ತಣ್ಣೀರು ತಟ್ಟುವುದರಿಂದ ಶೀಘ್ರವೇ ಎಚ್ಚರ ಉಂಟಾಗುವುದು ಮತ್ತು ಈರುಳ್ಳಿಯನ್ನು ಜಜ್ಜಿ ಮೂಗಿನ ಬಳಿ ಹಿಡಿದು ವಾಸನೆಯನ್ನು ತೋರಿಸುವುದರಿಂದಲೂ ಎಚ್ಚೆತ್ತುಕೊಳ್ಳುವ.

ಜಲ ಚಿಕಿತ್ಸೆಯಿಂದ ಕೆಲ ಜನಪ್ರಿಯ ಮಾಹಿತಿಗಳು.

ಶುದ್ಧ ಕರಿಸಿದ ನೀರನ್ನು ಒಲೆಯ ಮೇಲಿಟ್ಟು ಚೆನ್ನಾಗಿ ಕುದಿಸಿ ನೀರು ತುಂಬಿರುವ ಪಾತ್ರೆಯನ್ನು ತಟ್ಟೆಯೊಂದರಿಂದ ಮುಚ್ಚಿ ನೀರು ಚೆನ್ನಾಗಿ ಕುದಿ ಬಂದ ಮೇಲೆ ಕೆಳಗಿರಿಸಿ  ಪಾತ್ರೆಯ ಮೇಲಿರುವ ತಟ್ಟೆಯನ್ನು ತೆಗೆಯದೆ ನೀರಿನ ಬಿಸಿಯನ್ನು ಆರಲು ಬಿಡಿ ನೀರು ತಣ್ಣಗಾದ ನಂತರ ನಿಮಗೆ ಬೇಕೆಂಬಷ್ಟು ನೀರನ್ನು ನೀವು ಸೇವಿಸಬಹುದು.

ನೀರನ್ನು ಶೀತಗೊಳಿಸಿ ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ಉತ್ತಮವಲ್ಲ.

ತಲೆಗೆ ತಣ್ಣೀರಿನಿಂದ ಸ್ನಾನ ಮಾಡುವುದು ಆರೋಗ್ಯಕರ ಹಾಗೂ ತಲೆಯಲ್ಲಿ ಕೂದಲು ಚೆನ್ನಾಗಿ ಬೆಳೆಯುತ್ತದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here