ಎರಡು ನಿಮಿಷದಲ್ಲಿ ನಿಮ್ಮ ದಾರಿದ್ರ್ಯ ನಿವಾರಿಸಿಕೊಳ್ಳಿ

0
5509

ಎರಡು ನಿಮಿಷದಲ್ಲಿ ನಿಮ್ಮ ದಾರಿದ್ರ್ಯ ನಿವಾರಣೆ ಮಾಡ್ಕೊಳ್ಬಹುದು. ಅದು ಹೇಗೆ ಅಂತೀರಾ?! ಹೇಳ್ತೀವಿ ಬನ್ನಿ. ಪ್ರತಿಯೊಬ್ಬರೂ ಹಗಲು ರಾತ್ರಿ ದುಡಿತಾ ಇರ್ತಾರೆ. ನೀತಿ ನಿಜಾಯಿತಿ ಅಂತ ಇರ್ತಾರೆ. ಆದರೆ ಅವರ ಕೈಯಲ್ಲಿ ದುಡ್ಡೇ ನಿಲ್ಲುವುದಿಲ್ಲ. ಎಷ್ಟು ಕಷ್ಟಪಟ್ಟರೂ ಶ್ರೀಮಂತರಾಗುವುದು ಬಿಡಿ ಇದ್ದ ಸಾಲವನ್ನೂ ತೀರಿಸಲು ಕಷ್ಟವಾಗುತ್ತೆ. ಆರ್ಥಿಕ ಸಾಮಾಜಿಕವಾಗಿ ಪ್ರತಿಯೊಂದರಲ್ಲೂ ಯಶಸ್ಸು ದೂರ ದೂರ ಹೋಗ್ತಾ ಇರತ್ತೆ.

ಕೆಲವೊಮ್ಮೆ ಸಂಕಲ್ಪಿಸಿದ ಕಾರ್ಯ ಕೂಡ ನಡೆಯೋದೆ ಇಲ್ಲ. ಎನೋ ಒಂದು ಅಡ್ಡಿ ಅತಂಕ ಎದುರಾಗುತ್ತದೆ. ಇದರಿಂದ ಕಂಗಲಾಗಿ ಆರಕ್ಕೆ ಎರದೇ ಮೂರಕ್ಕೆ ಇಳಿಯದೆ ನಮ್ಮ ಹಣೆಬರಹವೇ ಇಷ್ಟು ಅಂತ ಜೀವನ ಸಾಗಿಸ್ತಾರೆ ಎಷ್ಟೋ ಜನ. ಒಮ್ಮೊಮ್ಮೆ ನಮ್ಮ ಹತ್ತಿರದವರು ,ಸ್ನೇಹಿತರು ದೂರ ಆಗ್ತಾರೆ. ನಮ್ಮನ್ನು ಅರ್ಥ ಮಾಡಿಕೊಳ್ಳದೆ ಅನರ್ಥ ಮಾಡಿಕೊಂಡು ದೂರ ಆಗಿ ನಮಗೆ ನೋವು ಉಂಟು ಮಾಡ್ತಾರೆ.

ಇದಕ್ಕೆಲ್ಲ ಕಾರಣ ಮನೆಯಲ್ಲಿ ಯಾವಾಗಲೂ ನೆಗೆಟಿವ್ ಶಕ್ತಿ ಇರುವುದು. ನೆಗೆಟಿವ್ ಎನರ್ಜಿ, ನೆಗೆಟಿವ್ ಥಾಟ್ ಹಾಗೂ ನೆಗೆಟಿವ್ ಥಿಂಕಿಂಗ್ ಇವು ಮೂರು ಮನೆಯಲ್ಲಿ ಇದ್ದರೆ ದಾರಿದ್ರ್ಯ ಇದ್ದೇ ಇರತ್ತೆ. ಈ ರೀತಿಯ ನೆಗೆಟಿವ್ ಇದ್ದರೆ ನಾವು ಎನೇ ಮಾಡಿದರೂ ಅದು ಸಪಲತೆ ಕಾಣುವುದಿಲ್ಲ. ಅದಕ್ಕೆ ನಾವು ನಕಾರಾತ್ಮಕ ಶಕ್ತಿಯನ್ನು ಹೊರಹಾಕಲೆಬೇಕು.

ಇದಕ್ಕೆ ಪರಿಹಾರವನ್ನು ಶಾಸ್ತ್ರಗಳು ಹೇಳಿವೆ. ನಾಲ್ಕು ಜೊತೆ ಕರ್ಪುರದ ಬಿಲ್ಲೆಯನ್ನು ತೆಗೆದುಕೊಳ್ಳಿ. 7 ಜೊತೆ ಲವಂಗ ತೆಗೆದುಕೊಳ್ಳಿ. ಎರಡು ಕರ್ಪೂರದ ಮೇಲೆ ಒಂದು ಕರ್ಪೂರ ಇಡಿ. ಎರಡು ಲವಂಗದ ಮೇಲೆ ಒಂದು ಲವಂಗ ಇಡಿ. ಕರ್ಪೂರವನ್ನು ಉರಿಸಿ ಅದರ ಮೇಲೆ ಲವಂಗವನ್ನು ಹಾಕಿ. ಕರ್ಪೂರ ಉರಿಯುವಾಗ ಒಂದು ರೀತಿಯ ಶಬ್ದ ಬರುತ್ತದೆ. ಇದರಿಂದ ಮನೆಯಲ್ಲಿನ ನಕಾರಾತ್ಮಕ ಶಕ್ತಿ ಹೊರಹೋಗುತ್ತದೆ. ಹೀಗೆ 7 ದಿನಗಳ ಕಾಲ ಮಾಡಿ. ನಂತರ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೊರಟು ಹೋಗಿ ಜೀವನದಲ್ಲಿ ಸಕ್ಸಸ್ ಆಗಬಹುದು. ಮತ್ತೆ ನೀವು ಯಾವುದೇ ಕೆಲಸ ಮಾಡಿದರೂ ಅಲ್ಲಿ ಗೆಲುವು ಇರುತ್ತದೆ. ಹಣ, ಐಶ್ವರ್ಯ, ನೆಮ್ಮದಿ ಎಲ್ಲಾ ಮತ್ತೆ ಪಡೆಯಬಹುದು.

LEAVE A REPLY

Please enter your comment!
Please enter your name here