ಬಾಳೆ ದಿಂಡನ್ನು ಈ ರೀತಿ ಬಳಸಿದರೆ ಮಧುಮೇಹ, ಕಿಡ್ನಿಯಲ್ಲಿ ಕಲ್ಲು, ಮಲಬದ್ಧತೆ ಹಾಗು ಹಲವು ಸಮಸ್ಯೆಗೆ ಸಿಗುತ್ತೆ ಪರಿಹಾರ..!!

0
16522

ಹೊಟ್ಟೆಯಲ್ಲಿ ಉಂಟಾಗುವ ಅಸಿಡಿಟಿಯನ್ನು ಕಡಿಮೆ ಮಾಡುತ್ತದೆ : ನಮ್ಮ ಆಹಾರ ಕ್ರಮ ಸರಿ ಇಲ್ಲದ ಕಾರಣ ಅಸಿಡಿಟಿ ಉಂಟಾಗುತ್ತದೆ ಇದರಿಂದ ಎದೆಯಭಾಗದಲ್ಲಿ ನೋವು ಉಂಟಾಗಿ ಮತ್ತು ಹೊಟ್ಟೆಯಲ್ಲಿ ಕಿರಿಕಿರಿಯಾಗುತ್ತದೆ ಇದರಿಂದ ಜೀವನವೇ ಬೇಸರ ಆಗಬಹುದು ಒಂದು ಬಾಳೆ ದಿಂಡಿನ ರಸವನ್ನು ಕುಡಿಯುವುದರಿಂದ ನಿಮ್ಮ ಅಸಿಡಿಟಿ ತೊಂದರೆಗೆ ಮುಕ್ತಾಯ ಹೇಳಬಹುದು.

ಮಧುಮೇಹವನ್ನು ನಿಯಂತ್ರಿಸುತ್ತದೆ : ಮಧುಮೇಹ ಕಾಯಿಲೆ ಬರುವುದು ದೇಹದಲ್ಲಿನ ಪ್ಯಾಂಕ್ರಿಯಾಸ್ ಗ್ರಂಥಿಯಿಂದ ಇನ್ಸುಲಿನ್ ಸರಿಯಾದ ಪ್ರಮಾಣದಲ್ಲಿ ಉತ್ಪತ್ತಿ ಆಗದೆ ಇರುವುದರಿಂದ ಈ ಕಾಯಿಲೆ ಬರುತ್ತದೆ ಇದಕ್ಕೆ ಬಾಳೆದಿಂಡನ್ನು ಕುಡಿಯುವುದರಿಂದ ಇನ್ಸುಲಿನ್ ಪ್ರಮಾಣ ದೇಹದಲ್ಲಿ ಹೆಚ್ಚಾಗಿ ಮಧುಮೇಹ ರೋಗ ಸಮತೋಲನ ವಾಗುತ್ತದೆ.

ಕಿಡ್ನಿಯಲ್ಲಿನ ಕಲ್ಲುಗಳನ್ನು ಕರಗಿಸುವಲ್ಲಿ ನೆರವಾಗುತ್ತದೆ : ನೀವು ಈಗಾಗಲೇ ಮೂತ್ರಪಿಂಡದಲ್ಲಿ ಕಲ್ಲು ಕಾಣಿಸಿಕೊಂಡು ಅದರಿಂದ ನರಳುತ್ತಿದ್ದರೆ ಮೊದಲು ಬಾಳೆದಿಂಡನ್ನು ಬಳಸಿ ಅದರಿಂದ ಉಪಶಮನವನ್ನು ಪಡೆಯಿರಿ.

ತೂಕ ಇಳಿಸಲು ನೆರವಾಗುತ್ತದೆ : ಬಾಳೆ ದಿಂಡು ನಿಮಗೆ ಗೊತ್ತಿರುವ ಹಾಗೆ ಒಂದು ಗಟ್ಟಿ ಪದಾರ್ಥ ಇದರಲ್ಲಿರುವ ನಾರಿನ ಅಂಶವನ್ನು ಕರಗಿಸಲು ಮತ್ತು ಪೋಷಕಾಂಶವನ್ನು ದೇಹಕ್ಕೆ ಒದಗಿಸಲು ದೇಹದಲ್ಲಿನ ಕೊಬ್ಬು ಅತಿ ಹೆಚ್ಚಿನ ಪ್ರಮಾಣದಲ್ಲಿ ಕರಗಲು ನೆರವಾಗುತ್ತದೆ.

ಬದ್ಧತೆಯನ್ನು ನಿವಾರಿಸುತ್ತದೆ : ಇನ್ನು ನೀವು ಬಾಳೆದಿಂಡನ್ನು ಸತತವಾಗಿ ಬಳಸುವುದರಿಂದ ಮಲಬದ್ಧತೆಯಿಂದ ನಿವಾರಣೆ ಪಡೆಯಬಹುದು ಬಾಳೆ ದಿಂಡಿನ ಜ್ಯೂಸ್ ನಲ್ಲಿ ಹೇರಳವಾಗಿ ನಾರಿನ ಪದಾರ್ಥ ಇರುವುದರಿಂದ ಮಲಬದ್ಧತೆ ಇಂದ ಮುಕ್ತಿ ಹೊಂದಬಹುದು.

ರಕ್ತ ಹೆಪ್ಪುಗಟ್ಟಲು ನೆರವಾಗುತ್ತದೆ : ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುವುದು ಪ್ಲೇಟ್ಲೆಟ್ಸ್ ಮತ್ತು ವಿಟಮಿನ್ ಡ್12 ಮತ್ತು ವಿಟಮಿನ್ ಕೆ, ಇನ್ನು ನೀವು ಬಾಳೆದಿಂಡನ್ನು ಅಂದರೆ ಬಾಳೆದಿಂಡಿನ ರಸವನ್ನು ಕುಡಿಯುವುದರಿಂದ ರಕ್ತ ಹೆಪ್ಪುಗಟ್ಟುವ ಸಹಾಯವಾಗುತ್ತದೆ ರಕ್ತ ಹೆಪ್ಪು ಗಟ್ಟಲು ನೆರವಾಗುವುದು ನಿಮಗೆ ಗಾಯವಾದಾಗ.

ಮೂತ್ರನಾಳದ ಸೋಂಕನ್ನು ನಿವಾರಿಸುತ್ತದೆ : ನೀವು ಮೂತ್ರ ಮಾಡುವಾಗ ಉರಿಯುತ್ತಿದ್ದರೆ ಅದಕ್ಕೆ ಬಹಳ ಮುಖ್ಯವಾಗಿ ಮೂತ್ರನಾಳದ ಸೋಂಕು ಕಾರಣವಾಗಿರುತ್ತದೆ ಇದಕ್ಕಾಗಿ ದಿನಕ್ಕೆ ಎರಡು ಲೋಟದಂತೆ ಮೂರು ದಿನ ಬಾಳೆದಿಂಡಿನ ರಸವನ್ನು ಕುಡಿಯುವುದರಿಂದ ಗುಣಮುಖವಾಗುತ್ತದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here