ದೇವಸ್ತಾನ ಪ್ರವೇಶಕ್ಕೂ ಮುನ್ನ ಕೈ ಕಾಲು ಏಕೆ ತೊಳೆಯುತ್ತಾರೆ ಗೊತ್ತಾ.

0
5129

ದೇವಾಲಯ ಅಥವಾ ಮನೆಯನ್ನು ಪ್ರವೇಶಿಸುವ ಮೊದಲು ನಾವು ನಮ್ಮ ಪಾದಗಳನ್ನು ತೊಳೆದುಕೊಳ್ಳುತ್ತೇವೆ. ನಾವು ಪಾದಗಳನ್ನು ತೊಳೆದುಕೊಳ್ಳದೆ ಅಥವಾ ಶೂಗಳನ್ನು ಧರಿಸಿ ದೇವಸ್ಥಾನಕ್ಕೆ ಪ್ರವೇಶಿಸುವುದು ಹಿಂದೂ ಧರ್ಮದಲ್ಲಿ ನಿಷಿದ್ಧ ಮತ್ತು ದೊಡ್ಡ ಪಾಪವೆಂದು ಪರಿಗಣಿಸಲಾಗುತ್ತದೆ ಅದಕ್ಕಾಗಿಯೇ ಪ್ರತಿ ದೇವಾಲಯದ ಮುಂದೆ ನೀರಿನ ಮೂಲ ಇದ್ದೆ ಇರುತ್ತದೆ, ಅನೇಕ ಪವಿತ್ರ ದೇವಾಲಯಗಳು ನೀರಿನ ಪಕ್ಕದಲ್ಲೇ ನಿರ್ಮಿತವಾಗಿರುತ್ತದೆ (ನದಿ, ಕೊಳ, ಸಮುದ್ರ).

ಸಾಂಸ್ಕೃತಿಕ ನಂಬಿಕೆಗಳು : ಸನಾತನ ಧರ್ಮದ ಪ್ರಕಾರ ಒಬ್ಬ ಮನುಷ್ಯ ದೇವರನ್ನು ಶುದ್ಧ ಮನಸ್ಸು ಮತ್ತು ದೇಹದಿಂದ ಪ್ರಾರ್ಥಿಸಬೇಕು. ಪವಿತ್ರ ಸ್ಥಳಕ್ಕೆ ಪ್ರವೇಶಿಸುವಾಗ ಇದನ್ನು ಶುದ್ಧೀಕರಣ ಆಚರಣೆ ಎಂದು ಕರೆಯಲಾಗುತ್ತದೆ. ಈಗ ಕೂಡಾ ಅನೇಕ ಜನರು ಭೂಮಿಗೆ ಬಾಗುವ ಮೂಲಕ ತಮ್ಮ ಹಣೆಯ ಅಥವಾ ಕೈಯಿಂದ ಪ್ರವೇಶದ್ವಾರವನ್ನು ಸ್ಪರ್ಶಿಸುತ್ತಾರೆ. ಇದು ಸ್ಥಳದ ಮೇಲಿರುವ ಗೌರವವನ್ನು ಸೂಚಿಸುತ್ತದೆ.

ಆದ್ದರಿಂದ ಪವಿತ್ರ ಸ್ಥಳಕ್ಕೆ ಪ್ರವೇಶಿಸುವ ಮೊದಲು ಪಾದಗಳನ್ನು ತೊಳೆಯುವುದರ ಮೂಲಕ ಶುದ್ಧತೆಯನ್ನು ಕಾಪಾಡಿಕೊಳ್ಳಬೇಕು. ಮುಖ್ಯವಾಗಿ ಬೂಟುಗಳು ಅಥವಾ ಸ್ಯಾಂಡಲ್ಗಳು ಚರ್ಮದಿಂದ ತಯಾರಿಸಲಾಗುತ್ತದೆ ಆದ್ದರಿಂದ ದೇವಾಲಯದೊಳಗೆ ಪ್ರವೇಶಿಸುವ ಮೊದಲು ಪಾದಗಳನ್ನು ತೊಳೆದುಕೊಂಡು ಪ್ರವೆಶಿಸಬೇಕಾಗುತ್ತದೆ ಇದು ಪ್ರಾಚೀನ ಕಾಲದಿಂದ ಬಂದ ಮೂಲ ಶಿಷ್ಟಾಚಾರವಾಗಿದೆ.

ಕುತೂಹಲಕಾರಿ ಸಂಗತಿಗಳು : ಹಿಂದೂ ಧರ್ಮದ ಪ್ರಕಾರ ಮನೆಯನ್ನು ಪವಿತ್ರ ಸ್ಥಳವೆಂದು ಪರಿಗಣಿಸುತ್ತಾರೆ ಮತ್ತು ಅವುಗಳಿಗೆ ಗೌರವವನ್ನು ಕೊಡುತ್ತಾರೆ, ಏಕೆಂದರೆ ಹವಾಮಾನ ಪರಿಸ್ಥಿತಿಗಳಿಂದ ನಮ್ಮನ್ನು ರಕ್ಷಿಸುವ ಮತ್ತು ಆಶ್ರಯವನ್ನು ನೀಡುವ ಪ್ರಮುಖ ಮೂಲವಾಗಿದೆ, ಹಿಂದೂ ಸಂಪ್ರದಾಯದ ಪ್ರಕಾರ ಪಾದಗಳನ್ನು ತೊಳೆಯುವುದು, ಸ್ನಾನ ಮಾಡುವುದು, ತೇವದ ಬಟ್ಟೆಗಯಲ್ಲೇ ಪ್ರಾರ್ಥನೆ ಅರ್ಪಿಸುವುದು ಮತ್ತು ಧಾರ್ಮಿಕ ಆಚರಣೆಯು ನೈರ್ಮಲ್ಯ ಕ್ರಿಯೆಗಿಂತ ಹೆಚ್ಚು ವಿಜ್ಞಾನವನ್ನು ಹೊಂದಿದೆ.

ವೈಜ್ಞಾನಿಕ ಕಾರಣಗಳು : ನಮ್ಮ ದೇಹವು ಶಕ್ತಿಯ ಮನೆ ಯಾವಾಗಲೂ ವಿದ್ಯುತ್ ಪ್ರವಾಹಗಳನ್ನೂ ಉತ್ಪಾದಿಸುತ್ತದೆ ಮತ್ತು ಪ್ರಚೋದನೆಗಳನ್ನು ಪಡೆಯುತ್ತದೆ. ನಾವು ಹೆಚ್ಚುಪ್ರಚೋದಿತವಾದಾಗ ಹೆಚ್ಚು ವಿದ್ಯುತ್ ಪ್ರವಾಹಗಳು ಉಂಟಾಗುತ್ತವೆ ಹಾಗೆ ನಾವು ಖಿನ್ನತೆಗೆ ಒಳಗಾದಗ ವಿದ್ಯುತ್ ಪ್ರವಾಹಗಳು ನೆಲೆಗೊಳ್ಳುತ್ತದೆ. ಅದಕ್ಕಾಗಿಯೇ ನಮ್ಮ ಭಾವನೆಗಳು ಮತ್ತು ವರ್ತನೆಗಳು ನಮ್ಮ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ವೈದಿಕ ಮಹರ್ಷಿ ವಿವರಿಸಿದಂತೆ,ಮಾನವ ದೇಹವು ಚಕ್ರಗಳೆಂದು ಕರೆಯಲಾಗುವ ವಿವಿಧ ಶಕ್ತಿ ಕೇಂದ್ರಗಳನ್ನು ಹೊಂದಿದೆ. ರಾತ್ರಿಯಲ್ಲಿ ನಾವು ವಿಶ್ರಾಂತಿ ಮಾಡಿದಾಗ ಎಲ್ಲಾ ಭಾಗಗಳು ಶಕ್ತಿಯನ್ನು ಉತ್ಪತ್ತಿ ಮಾಡುವುದನ್ನು ನಿಲ್ಲಿಸಿರುತ್ತದೆ ನಾವು ಎಚ್ಚರವಾದಾಗ ಸ್ವಲ್ಪ ಸಮಯದವರೆಗೆ ಸ್ವಲ್ಪ ಸೋಮಾರಿತನ ಆವರಿಸಿರುತ್ತದೆ. ಈ ಸೋಮಾರಿತನವನ್ನು ಜಯಿಸಲು ಸ್ನಾನ ಅಥವಾ ಮುಖ ತೊಳೆದುಕೊಳ್ಳಲು ನಮ್ಮ ಹಿರಿಯರು ಹೇಳುತ್ತಿದರು.

ನಾವು ವಿವಿಧ ಸ್ಥಳಗಳ ಸುತ್ತ ಸುತ್ತುತ್ತೇವೆ, ಅಲ್ಲಿ ಅನಾರೋಗ್ಯಕರ ಅಥವಾ ಶುಚಿತ್ವದ ಕೊರತೆಯಾಗಿರಬಹುದು. ಹಲವು ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳು ದೇಹಕ್ಕೆ ಕಾಲುಗಳ ಮೂಲಕ ಪ್ರವೇಶಿಸುತ್ತವೆ, ನಾವು ಮನೆಯೊಳಗೆ ಪ್ರವೇಶಿಸಿದಾಗ ಇವುಗಳು ಸುತ್ತಮುತ್ತಲಿನ ಪ್ರದೇಶದಲ್ಲಿ ಹರಡಬಹುದು. ವಿಶೇಷವಾಗಿ ನೆಲದ ಮೇಲೆ ಆಡುವ ಮಕ್ಕಳು ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.

ಅನೇಕ ಪ್ರದೇಶಗಳಲ್ಲಿ ಋಣಾತ್ಮಕ ಶಕ್ತಿಯನ್ನು ಹೊಂದಿರುವ ಕೆಟ್ಟ ಶಕುನಗಳನ್ನು (ಉಪ್ಪು, ಕೆಂಪು ನೀರು, ತೆಂಗಿನಕಾಯಿ, ನಿಂಬೆಹಣ್ಣು) ಎಸೆದಿರುತ್ತಾರೆ ಅದಕ್ಕಾಗಿಯೇ ಹಿಂದೂ ಧರ್ಮವು ಪಾದಗಳನ್ನು ತೊಳೆಯುವ ಆರೋಗ್ಯಕರ ಅಭ್ಯಾಸವನ್ನು ಪರಿಚಯಿಸಿತು.

LEAVE A REPLY

Please enter your comment!
Please enter your name here