ಶನಿವಾರ ಈ ಕೆಲಸ ಮಾಡಿದರೆ ಖಂಡಿತ ಶನಿ ನಿಮ್ಮ ಬೆನ್ನ ಮೇಲೆ ಕುಳಿತುಕೊಳ್ಳುತ್ತೆ !

0
3715

ಶನಿ ದೇವರ ಮಹಿಮೆ ಎಲ್ಲರ ಮೇಲೆ ಇರಬೇಕು ಆದರೆ ಶನಿ ಯಾರ ಹೆಗಲ ಮೇಲೂ ಕೂಡ ಕೂರ ಬಾರದು ಹಾಗೆ ಕೂತರೆ ನಮ್ಮ ಜೀವನದಲ್ಲಿ ಹಣ, ಆರೋಗ್ಯ ಎಲ್ಲಾ ಹದಗೆಟ್ಟು ಹೋಗಿ ಗ್ರಹಚಾರ ನಮ್ಮ ಹೆಗಲ ಮೇಲೆ ಕುಳಿತು ನಮ್ಮ ಯಶಸ್ಸಿಗೆ ಅಡ್ಡ ದಾರಿ‌ ಆಗುತ್ತೆ. ಯಶಸ್ಸಿಗೆ ಗ್ರಹಗತಿಗಳು ತುಂಬಾ ಮುಖ್ಯ. ಗ್ರಹಗತಿಗಳು ಆಚೆ ಈಚೆ ಆದಾಗ‌ ನಾವು ನಿರಾಸಕ್ತಿವಯಿಸಿದರೆ ಯಶಸ್ಸಿನ ಹತ್ತಿರಕ್ಕೆ ಬಂದಾಗ ತುಂಬಾ ತೊಂದರೆ ಉಂಟಾಗಿ ಸಿಗುವ ಗೆಲವು ಕೈ ಚೆಲ್ಲ ಬಹುದು.

ಶನಿವಾರದಂದು ಈ ಕೆಲಸ ಮಾಡಲು ನೀವು ಮೂರು ಸಲ ಯೋಚನೆಯನ್ನು ಮಾಡಿ. ಯಾಕೆಂದರೆ ನೀವು ಸಂಜೆ ಈ ಕೆಲಸ ಮಾಡಿದರೆ ತುಂಬಾ ಅಪಾಯ ಆಗುವ ಸಾಧ್ಯತೆ ಇದೆ. ಈ ಅಪಾಯದಿಂದ ಪಾರಾಗಲು ಹಲವು ದಾರಿ‌ ಇದ್ದರೂ, ಅಪಾಯ ಬರುವ ಮುಂಚೆ‌ ಎಚ್ಚರ ವಹಿಸಬೇಕು. ಆದುದರಿಂದ ನಾವು ಈ‌ ಶನಿವಾರ ಏನು ಮಾಡಬಾರದೆಂದು ನೋಡೋಣ‌ ಶನಿವಾರ ಶನಿದೋಷ ಇದ್ದವರು ಅರಳಿ ಕಟ್ಟೆಗೆ ಸುತ್ತು ಹಾಕುತ್ತಾರೆ.

ಆದರೆ ಕೆಲವರು ಅರಳಿ ಸುತ್ತು ಹಾಕುವ ಭರದಲ್ಲಿ ಭಕ್ತಿಯಿಂದ ಮಾಡುವ ಬದಲು ಗಡಿಬಿಡಿಯಿಂದ ಸುತ್ತು ಹಾಕುತ್ತಾರೆ. ಆದುದರಿಂದ ಶನಿ ನಿವಾರಣೆಗೆ ನೀವು ಅರಳಿ ಅಥವಾ ಅಶ್ವಥ ಮರದ ಸುತ್ತು ಹಾಕುವಾಗ ಮರದ ನಾಲ್ಕು ದಿಕ್ಕಿನಲ್ಲಿ ನಿಂತು ಕೈ ಮುಗಿಯಬೇಕು. ನಂತರ ಅರಳಿ ಕಟ್ಟೆಯ ಮೇಲೆ‌ ನಿಂತು ಸೂರ್ಯ ದೇವನಿಗೆ ಕೈ ಮುಗಿದು ಅರಳಿ ಮರಕ್ಕೆ ಪ್ರದಕ್ಷಿಣೆ ಹಾಕಬೇಕು. ಹೆಚ್ಚಿನವರು ಸೂರ್ಯ ವಂದನೆ ಮಾಡದ ಕಾರಣ ಶನಿ ನಿವಾರಣೆ ಆಗುವುದಿಲ್ಲ.

ಶನಿವಾರ ಆಜಂನೇಯ ದೇವಸ್ಥಾನಕ್ಕೆ ತೆರಳಿ ಕೈ ಮುಗಿದು ಮರೆಯದಿರಿ. ಹಾಗೆ ಶನಿ ದೋಷ ಇದ್ದವರು ಶನಿವಾರ ಕಪ್ಪು ಎಳ್ಳಿನ ದೀಪ ಹಚ್ಚಿದರೆ ತುಂಬಾ ಒಳ್ಳೆಯದು. ನಿಮ್ಮ ಆರೋಗ್ಯ ಸಮಸ್ಯೆ, ಮಾನಸಿಕ ಖಿನ್ನತೆ, ಒತ್ತಡದ ಜೀವನ, ಉದ್ಯೋಗದಲ್ಲಿ ಸಮಸ್ಯೆ, ಪ್ರೇಮ ಕಲಹ, ಸ್ನೇಹಿತ ನಡುವೇ ವೈಮನಸ್ಸು, ಕುಟುಂಬ ಕಲಹ ಹೀಗೆ ಯಾವುದೆ ಸಮಸ್ಯೆ ಇದ್ದರು ನೀವು ನಿಮ್ಮ ಮೇಲೆ ನಂಬಿಕೆ ಇಡಿ‌. ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿದರೆ ಪಾಸಿಟಿವ್ ಶಕ್ತಿ ನಿಮ್ಮ ದೇಹಕ್ಕೆ ಸೇರುತ್ತದೆ. ಈ ಮೂಲಕ ನಿನ್ನ ಮನಸ್ಸು ನಿಮ್ಮ ಹಿಡಿತದಲ್ಲಿ ಇರುತ್ತದೆ. ಆದುದರಿಂದ ದೇವಸ್ಥಾನ ತೆರಳಿದೆ ನಂತರ ದೇವರಿಗೆ ಮುಖ ಮಾಡಿ 5-10 ನಿಮಿಷ ಕುಳಿತುಕೊಳ್ಳಿ.ನೀವು ಸಮಯದ ಅಭಾವ ಇದ್ದಾಗ ದೇವಸ್ಥಾನಕ್ಕೆ ತೆರಳಿದರೆ ಪ್ರಯೋಜನವಿಲ್ಲ. ದೇವಸ್ಥಾನಕ್ಕೆ ತೆರಳುವಾಗ ಸಾಕಷ್ಟು ಸಮಯದ ಮುಂಚಿತವಾಗಿ ಹೋಗಿ‌.

LEAVE A REPLY

Please enter your comment!
Please enter your name here