ಕರೋಡ್ ಪತಿಯಲ್ಲಿ ಗೆದ್ದ ಹಣವನ್ನು ಸುಧಾ ಅಮ್ಮ ಏನು ಮಾಡುತ್ತಾರೆ ?

0
2754

ಸುಧಾಮೂರ್ತಿಯವರು ಕರ್ನಾಟಕದ ಹೆಮ್ಮೆ. ಪ್ರತಿಷ್ಠಿತ ಕಂಪನಿಯಾದ ಇನ್ಫೋಸಿಸ್ ನಾರಾಯಣ ಮೂರ್ತಿಯವರ ಧರ್ಮಪತ್ನಿಯವರಾದ ಸುಧಾಮೂರ್ತಿ ಕೋಟ್ಯಾಧೀಶರಾದರೂ ಅತ್ಯಂತ ಸರಳ ಜೀವನ ನಡೆಸುತ್ತಾರೆ. 20 ಸಾವಿರ ಶೌಚಾಲಯಗಳನ್ನು ದೇಶಾದ್ಯಂತ ಕಟ್ಟಿಸಿದ್ದಾರೆ. 70 ಸಾವಿರ ಗ್ರಂಥಾಲಯಗಳನ್ನು ನಿರ್ಮಿಸಿದ್ದಾರೆ. ಕೊಡಗಿನ ನೆರೆ ಸಂತ್ರಸ್ತರಿಗೆ ಮನೆಗಳನ್ನು ನಿರ್ಮಿಸಲು ಸಹಾಯ ಮಾಡಿದ್ದಾರೆ. ಅಂತಹ ಸುಧಾಮೂರ್ತಿಯವರನ್ನು ಕರ್ನಾಟಕದ ಜನತೆ ಅಮ್ಮಾ ಎಂದು ಪ್ರೀತಿಯಿಂದ ಕರೆಯುತ್ತಾರೆ.

ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್’ಪತಿ ಕಾರ್ಯಕ್ರಮದ ಕಳೆದ ವಿಶೇಷವಾಗಿದೆ. ಕಾರಣ ಈ ಶೋನಲ್ಲಿ ಸುಧಾಮೂರ್ತಿಯವರು ವಿಶೇಷ ಸ್ಪರ್ಧಿಯಾಗಿ ಭಾಗವಹಿಸಿ ಎಲ್ಲರಿಗೂ ಅಚ್ಚರಿ ತಂದಿದ್ದರು.ಸುಧಾಮೂರ್ತಿಯವರ ಕಾಲಿಗೆ ಬಿದ್ದ ಅಮಿತಾಭ್ ಬಚ್ಚನ್ ಬಗ್ಗೆ ಅಭಿಮಾನ ಹೆಚ್ಚಾಗುತ್ತದೆ .ಕಾರಣ ಅವರ ವಯಸ್ಸಿಗಿಂತ ಚಿಕ್ಕವರಾದ ಸುಧಾಮೂರ್ತಿಯವರ ಕಾಲಿಗೆ ಬಿದ್ದು ಅವರು ಇನ್ನೂ ದೊಡ್ಡವರಾಗುತ್ತಾರೆ. ಸುಧಾಮೂರ್ತಿಯವರು ಜನತೆಗೆ ಮಾಡುತ್ತಿರುವ ನಿಸ್ವಾರ್ಥ ಸೇವೆಯಿಂದ ಸ್ಪೂರ್ತಿ ಪಡೆದ ಅಮಿತಾಭ್ ಬಚ್ಚನ್ ಬದುಕಿದರೆ ಅವರಂತೆ ಬದುಕಬೇಕು ಎಂದಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಸುಧಾಮೂರ್ತಿಯವರು ತಮ್ಮ ಬಾಲ್ಯದ ಜೀವನ, ಕಾಲೇಜು ಶಿಕ್ಷಣ , ಅಲ್ಲಿ ಶೌಚಾಲಯ ಇಲ್ಲದೆ ಪರಿತಪಿಸಿದ್ದು ಆನಂತರ ಮದುವೆಯಾದ ಮೇಲೆ ಸಾವುರಾರು ಶೌಚಾಲಯ ನಿರ್ಮಿಸಲು ಪಣ ತೊಟ್ಟಿದ್ದು ಇವೆಲ್ಲವನ್ನು ಹೇಳಿದರು. ಹತ್ತಾರು ಪುಸ್ತಕಗಳನ್ನು ಬರೆದ ಇವರು ಕನ್ನಡದ ಅತ್ಯುತ್ತಮ ಲೇಖಕಿಯಾಗಿದ್ದಾರೆ. ಇವರ ಲೇಖನ ಕನ್ನಡ ದಿನಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ.

ಸುಧಾಮೂರ್ತಿಯವರು ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮದಲ್ಲಿ 25 ಲಕ್ಷ ರೂಪಾಯಿಗಳನ್ನು ಗೆದ್ದರು. ಮೊದಲ ಪ್ರಶ್ನೆಗೆ ಉತ್ತರಿಸಿದ ಅವರು 1 ಲಕ್ಷದ 60 ಸಾವಿರ ರೂಪಾಯಿ ಗೆದ್ದರು. ಹೀಗೆ ಚೆನ್ನಾಗಿ ಆಡುತ್ತಿದ್ದ ಅವರು ಕೊನೆಯಲ್ಲಿ 25 ಲಕ್ಷ ರೂಪಾಯಿ ಗೆದ್ದರು. ಐವತ್ತು ಲಕ್ಷ ಪ್ರಶ್ನೆಗೆ ತಪ್ಪು ಉತ್ತರ ನೀಡಿದರು . ಆ ಪ್ರಶ್ನೆ ಹೀಗಿತ್ತು. ಸತತವಾಗಿ 2 ವರು ಷ ಫಿಲ್ಮ್ ಫೇರ್ ಪ್ರಶಸ್ತಿ ಪಡೆದ ನಟಿ ಯಾರು ? ಎಂದು. ಅದಕ್ಕೆ ಉತ್ತರ ತಿಳಿಯದೇ ಆಟವನ್ನು ಕೊನೆ ಮಾಡಿದರು. ಗೆಸ್ ಮಾಡಿದ ಉತ್ತರ ಕಾಜೊಲ್ ಆಗಿತ್ತು. ಆದರೆ ಸರಿ ಉತ್ತರ ಜಯಾ ಬಚ್ಚನ್ ಆಗಿತ್ತು.

ಸರಿ ಹಾಗಾದರೆ ಗೆದ್ದ 25 ಲಕ್ಷ ಹಣವನ್ನು ಏನು ಮಾಡುತ್ತಾರೆ ಗೊತ್ತೇ ? ಆ ಹಣವನ್ನು ಅವರು ಸ್ವಂತ ಖರ್ಚಿಗೆ ಬಳಸುವುದಿಲ್ಲ. ಸಮಾಜದ ಸುಧಾರಣೆಗೆ , ಬಡಕುಟುಂಬಗಳಿಗೆ ಸಹಾಯ ಮಾಡಲು ಅವರು ರೂಪಿಸಿದ ಟ್ರಸ್ಟ್’ಗೆ ಕೊಡುತ್ತಾರೆ. ಆ ಹಣವು ಬಡಬಗ್ಗರ ಉಪಯೋಗಕ್ಕೆ ಬರುತ್ತದೆ.

LEAVE A REPLY

Please enter your comment!
Please enter your name here