ಯಾರ ಮನೆಯಲ್ಲಿ ಕೊಬ್ಬರಿ ಎಣ್ಣೆ ದೀಪವನ್ನು ದೇವರಿಗೆ ಬೆಳಗಿಸುತ್ತಾರೋ ಆ ಮನೆಯಲ್ಲಿ ಶುಭಕಾರ್ಯಗಳು ಬಹಳ ಬೇಗ ಬರುತ್ತವೆ.
ಯಾವ ಮನೆಯಲ್ಲಿ ಮನೆದೇವರಿಗೆ ಅಂದರೆ ಕುಲದೇವತೆಗೆ ಕೊಬ್ಬರಿ ಎಣ್ಣೆಯ ದೀಪವನ್ನು ಅಖಂಡ ಅಂದರೆ ನಂದಾದೀಪ ದೇವರಿಗೆ ಹಚ್ಚುತ್ತಾರೆ ಆ ಮನೆಯಲ್ಲಿ ಸಿರಿ ಸಂಪತ್ತು ವೃದ್ಧಿಯಾಗುತ್ತದೆ.
ಯಾರ ಮನೆಯಲ್ಲಿ ಮದುವೆಯಾಗದ ಗಂಡು ಹಾಗೂ ಹೆಣ್ಣು ಮಕ್ಕಳು ಕಾತ್ಯಾಯಿನಿ ದೇವಿಯ ಪೂಜೆಯನ್ನು ಮಾಡುವಾಗ ಕೊಬ್ಬರಿ ಎಣ್ಣೆ ದೀಪವನ್ನು ದೇವರಿಗೆ ಹಚ್ಚಿದರೆ ಆ ಮನೆಯಲ್ಲಿ ಬಹಳ ಬೇಗ ಮದುವೆ ಕಾರ್ಯಗಳು ಜರುಗುತ್ತವೆ.
ಮಂಗಳವಾರ ಸುಬ್ರಮಣ್ಯ ಸ್ವಾಮಿಗೆ ಕೊಬ್ಬರಿ ಎಣ್ಣೆ ದೀಪವನ್ನು ದೇವರಿಗೆ ಹಚ್ಚಿದರೆ ಆ ಮನೆಯಲ್ಲಿ ಸಂತಾನ ಇಲ್ಲದವರಿಗೆ ಸಂತಾನ ಭಾಗ್ಯ ಲಭಿಸುವುದು.
ಅಶ್ವತ ಮರದ ಕೆಳಗೆ ಇರುವ ನಾಗರ ಕಲ್ಲಿಗೆ ತನಿ ಎರೆಯುವಾಗ ಶ್ರೀ ಅಶ್ವಥ್ ನಾರಾಯಣ ಸ್ವಾಮಿಗೆ ಕೊಬ್ಬರಿ ಎಣ್ಣೆ ಎಲ್ಲಿ ದೀಪ ಹಚ್ಚಿದರೆ ದಾಂಪತ್ಯ ಜೀವನದ ಕಲಹವು ನಿವಾರಣೆಯಾಗುತ್ತದೆ.
ಯಾರ ಜಾತಕದಲ್ಲಿ ವಿಪರೀತ ಕುಜ ದೋಷವು ಜಾಸ್ತಿ ಇರುತ್ತದೆಯೋ ಅವರು ಮಂಗಳವಾರ ಅಥವಾ ಶುಕ್ರವಾರ ಪೂಜೆ ಮಾಡುವ ಸಮಯ ಕೊಬ್ಬರಿ ಎಣ್ಣೆ ದೀಪವನ್ನು ದೇವರಿಗೆ ಹಚ್ಚಿ ಒಬ್ಬಟ್ಟನ್ನು ನೈವೇದ್ಯ ಮಾಡಿ, ಬಾಗಿನವನ್ನು ದಾನವಾಗಿ ಕೊಟ್ಟರೆ ಕುಜ ದೋಷ ನಿವಾರಣೆಯಾಗುತ್ತದೆ.
ಈಶಾನ್ಯದಿಕ್ಕಿನಲ್ಲಿ ಮಹಾಲಕ್ಷ್ಮಿ ದೇವಿಯ ಪೂಜೆ ಮಾಡಿ ಕೊಬ್ಬರಿ ಎಣ್ಣೆಯ ದೀಪವನ್ನು ಹಚ್ಚಿ 48 ದಿವಸಗಳ ಮಂಡಲ ಪೂಜೆಯನ್ನು ಯಾರು ಮಾಡುತ್ತಾರೋ ಅವರಿಗೆ ಬರಬೇಕಾಗಿದ್ದ ಸಾಲದ ಭಾಗ್ಯ ಬಂದು ಮನೆ ಸೇರುವುದು ಮತ್ತು ಶುಭ ಕಾರ್ಯಗಳು.
ಪ್ರತಿದಿನ ಮಹಾಲಕ್ಷ್ಮಿ ದೇವಿಗೆ ಕೊಬ್ಬರಿ ಎಣ್ಣೆ ದೀಪವನ್ನು ಹಚ್ಚಿ ಕೊಬ್ಬರಿ ಸಕ್ಕರೆ ನಿದ್ದೆ ಮಾಡುತ್ತಾರೆ ಶುಭಕಾರ್ಯಗಳು ಯಾವುದೇ ತೊಂದರೆ ಇಲ್ಲದೆ ನೆರವೇರುತ್ತವೆ.