ವಧು ಗೃಹಪ್ರವೇಶ ವೇಳೆ ಬ್ರಹ್ಮ ಸ್ವರೂಪವಾದ ಅಕ್ಕಿಯನ್ನು ಹೊಸಿಲಲ್ಲಿ ಇಟ್ಟು ಕಾಲಿನಿಂದ ಒದೆಯುವುದು ಏಕೆ ಗೊತ್ತಾ..?

0
3829

ಮದುವೆಯ ವೇಳೆ ಗಂಡು ಹೆಣ್ಣಿಗೆ ಅನ್ಯೋನ್ಯವಾಗಿ ಸಾಮರಸ್ಯದಿಂದ ಬದುಕಬೇಕು ಎಂಬುದನ್ನೇ ಮಂತ್ರಗಳ ಮುಖಾಂತರ ಪುರೋಹಿತರು ಹೇಳುವುದು, ಜೀವನದ ಆಧಾರಕ್ಕೆ ಅನ್ನ ಅಥವಾ ಅಕ್ಕಿ ಎಷ್ಟೇ ವೈವಾಹಿಕ ಜೀವನ ಆಧಾರಕ್ಕೆ ಅಥವಾ ಗೃಹಸ್ಥ ಜೀವನಾಧಾರಕ್ಕೆ ಅನ್ಯೋನ್ಯವಾಗಿ ಸಾಮರಸ್ಯದಿಂದ ಹೊಂದಿ ಬಾಳುವುದು ಪ್ರಧಾನವಾದುದು.

ಮೇಲಾಗಿ ಅಕ್ಕಿಯು ಬೆಳಗಿದ್ದು ಕಣಕಣದ ಪರಿಶುದ್ಧತೆಯನ್ನು, ಚಡಚಣದ ದಿವ್ಯ ನಾಮ ಸ್ಮರಣೆಯನ್ನು ಪ್ರತಿಬಿಂಬಿಸುತ್ತದೆ, ಸಾಮರಸ್ಯದ ಸಹಬಾಳ್ವೆಗೆ ಅಂತ ಅಡೆತಡೆಗಳು ಬಂದರೂ ಪರಿಶುದ್ಧತೆ, ದಿವ್ಯ ನಾಮ ಸ್ಮರಣೆಗಳ ಅಂತಃಶಕ್ತಿಯ ಬಲದಿಂದ ಅವನ್ನೆಲ್ಲಾ ಈಜುವಾಗ ತಳ್ಳಿ ಮುನ್ನಡೆಯುವಂತೆ ನಡೆ ತನ್ನ ದಾಗುದು ಈ ಮನೆಯಲ್ಲಿ.

ತನ್ಮೂಲಕ ಸಾಮರ್ಥ್ಯವೇ ಮನೆಯೊಳಗಿನ ಕಣಕಣದಲ್ಲೂ ನೆಲೆಸುವುದು ಎಂಬುದನ್ನು ತಿಳಿಸಲಿ ಎಂದು ನೂತನ ಮನೆಯ ಹೊಸ್ತಿಲ ಮೇಲೆ ಅಕ್ಕಿ ತುಂಬಿದ ಶೇರನ್ನು ಬಲಗಾಲಿನಿಂದ ತಳ್ಳಿಕೊಂಡು ಮನೆಯನ್ನು ಪ್ರವೇಶಿಸುವುದು ರೋಡಿ ಆಯಿತು.

ಇಲ್ಲಿ ಅಕ್ಕಿ ಇರುವ ಪಾತ್ರೆಯನ್ನು ತಳ್ಳಿಕೊಂಡು ದಾಟುವುದೇ ಹೊರತು ಸೊಕ್ಕಿನಿಂದ ಒದೆಯುವುದಿಲ್ಲ, ಅಥವಾ ಕುಮ್ಮಕ್ಕಿನಿಂದ ಮೆಟ್ಟುವುದಲ್ಲ, ಮನ ನಂಬಿದವಳು ಮನೆ ತುಂಬಲು ಬರುವಾಗ ಸಾಕ್ಷಾತ್ ಸಿರಿ ಲಕ್ಷ್ಮಿ ದೇವಿಯ ವರಪುತ್ರಿಯಂತೆ ಅಲ್ಲವೇ? ಹಾಗಾಗಿ ಅವಳ ಕಾಲ ಗುಣದಿಂದ ದವಸ ಧಾನ್ಯಗಳ ಸಮೃದ್ಧಿ ಆಗಲಿ ಎಂಬ ಮಹದಾಸೆಯಿಂದ ಈ ಪದ್ಧತಿ ಜಾರಿಯಲ್ಲಿದೆ.

ಇನ್ನು ಅಕ್ಕಿಯು ಏಕದಳ ಧಾನ್ಯ ವಾದ್ದರಿಂದ ಅದು ಒಂದಾಗಿರುವ ಪ್ರತೀಕವೂ ಹೌದು, ಇಷ್ಟೆಲ್ಲಾ ಅರ್ಥಗಳನ್ನು ಅದು ಬಿಂಬಿಸುವುದರಿಂದ ಹಾಗು ಅಂತ ಬೇರೆ ಧಾನ್ಯ ಇರದ ಕಾರಣ ಅಕ್ಕಿಯನ್ನು ಇಲ್ಲಿ ಬಳಸಲಾಗಿದೆ ಅಷ್ಟೇ, ಇದು ಅಕ್ಕಿಯ ಬ್ರಹ್ಮ ಸ್ವರೂಪಕ್ಕೆ ಸಂದ ಮಾನ್ಯತೆ ಯಾಗಿದೆ, ಆದರೆ ಅವಮಾನ್ಯತೆ ಅಲ್ಲ, ಆದ್ದರಿಂದ ಅವಹೇಳನದ ಪ್ರಶ್ನೆಯೇ ಉದ್ಭವಿಸದು.

ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸಲ್ಲಿ ಬರೆದು ತಿಳಿಸಿ.

LEAVE A REPLY

Please enter your comment!
Please enter your name here