ಎದೆ ನೋವು ಬಂದರೆ ನಿರ್ಲಕ್ಷ್ಯ ಮಾಡದೆ ಈ ರೀತಿ ಮಾಡಿ!

0
5218

ಎದೆನೋವು ಇಂದು ಎಲ್ಲರನ್ನೂ ಭಯಂಕರವಾಗಿ ಚಿಂತೆಗೆ ಒಳಪಡಿಸುವ ಕಾಯಿಲೆಯಾಗಿದೆ, ಯಾರೇ ಆಗಲಿ ಎದೆ ನೋವನ್ನು ನಿರ್ಲಕ್ಷದಿಂದ ನೋಡಬಾರದು, ಕೂಡಲೇ ಉತ್ತಮ ವೈದ್ಯರನ್ನು ಸಂಪರ್ಕಿಸಬೇಕು, ಆದರೆ ಎದೆನೋವು ಬರದಂತೆ ತಡೆಯುವುದು ಸೂಕ್ತ ಆಲೋಚನೆ, ಆದ್ದರಿಂದ ಇಂದು ನಾವು ನಿಮಗೆ ಎದೆ ನೋವಿನ ಕುರಿತು ಹಾಗು ಅದರ ಮನೆಮದ್ದಿನ ಕುರಿತು ಕೆಲವು ಸೂಚನೆಗಳನ್ನು ನೀಡುತ್ತೇವೆ.

ಪಪ್ಪಾಯ ಹಣ್ಣಿನ ಸೇವನೆಯಿಂದ ಹೃದಯದ ದೌರ್ಬಲ್ಯದಿಂದ ಮುಕ್ತರಾಗಬಹುದು, ಪಪ್ಪಾಯ ಹಣ್ಣಿನ ಬೀಜ, ಸಿಪ್ಪೆ ಸಮೇತ ಮಿಕ್ಸಿಗೆ ಹಾಕಿ ಕೊಂಡು ಪೇಸ್ಟ್ ನಂತೆ ತಯಾರಿಸಿ ಅದಕ್ಕೆ ಜೇನುತುಪ್ಪವನ್ನು ಬೆರೆಸಿ ತಿನ್ನಬಹುದು ಇದನ್ನು ಸೇವಿಸಿದ ನಂತರ ಉಗುರು ಬೆಚ್ಚಗಿನ ಹಾಲನ್ನು ಕುಡಿಯುವುದು ಒಳ್ಳೆಯದು.

ಸೂಕ್ತವಾದ ವ್ಯಾಯಾಮ ವಾಕಿಂಗ್ ಹೃದಯದ ದೌರ್ಬಲ್ಯವನ್ನು ದೂರ ಮಾಡುವುದು, ಕೊತ್ತಂಬರಿ ಬೀಜವನ್ನು ಅರ್ಧಂಬರ್ಧ ಅರೆದು ಒಂದು ಲೋಟ ನೀರಿಗೆ ಹಾಕಿ ಚೆನ್ನಾಗಿ ಕುದಿಸಬೇಕು ಅರ್ಧದಷ್ಟಾದ ಮೇಲೆ ಕಷಾಯವನ್ನು ಕೆಳಗಿಳಿಸಿ ನಂತರ ಅದಕ್ಕೆ ಹಾಲು ಸಕ್ಕರೆಯನ್ನು ಬೆರೆಸಿ ಕುಡಿಯಬೇಕು ಹೀಗೆ ಮಾಡುವುದರಿಂದ ಎದೆನೋವಿನಿಂದ ಮುಕ್ತರಾಗಬಹುದು.

ದೇಹದ ಎಡಭಾಗದಲ್ಲಿ ನೋವು ಕಾಣಿಸಿಕೊಂಡರೆ ಕೂಡಲೇ ವೈದ್ಯರ ಬಳಿಗೆ ತೆರಳುವುದು ಒಳ್ಳೆಯದು, ಹೃದಯ ಗಟ್ಟಿಗೊಳ್ಳಲು ಪೊಟ್ಯಾಶಿಯಂ ಅಗತ್ಯ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ ಸೇಬಿನಲ್ಲಿ ಪೊಟ್ಯಾಶಿಯಂ ಅಧಿಕವಾಗಿರುವುದು ಹೀಗಾಗಿ ಸೇಬನ್ನು ತಿನ್ನುವುದರಿಂದ ರೋಗದಿಂದ ಮುಕ್ತರಾಗಬಹುದು.

ಎದೆ ಉರಿಯು ಹೃದಯದ ರೋಗಗಳಲ್ಲಿ ಒಂದಾಗಿದೆ ಎದೆ ಉರಿ ಇರುವವರು ನಿಂಬೆರಸ ಮತ್ತು ಜೇನುತುಪ್ಪವನ್ನು ಸಮ ಪ್ರಮಾಣದಲ್ಲಿ ಸೇವಿಸುವುದರಿಂದ ಶಮನವಾಗುವುದು, ಶ್ವಾಸಕೋಶಗಳು ಚುರುಕಾಗಿರಲು ಕೊತ್ತಂಬರಿ ಸೊಪ್ಪಿನ ರಸ ಮತ್ತು ಜೇನುತುಪ್ಪವನ್ನು ಸಮ ಪ್ರಮಾಣದಲ್ಲಿ ಸೇವಿಸಬೇಕು.

ಪ್ರತಿದಿನವೂ ಈರುಳ್ಳಿಯನ್ನು ಹಸಿಯಾಗಿ ಅಥವಾ ಆಹಾರ ಪದಾರ್ಥದಲ್ಲಿ ಬಳಸುವುದರಿಂದ ಹೃದಯದ ತೊಂದರೆಗಳು ದೂರವಾಗುತ್ತವೆ ಹೃದಯದಲ್ಲಿರುವ ನರಗಳು ಕವಾಟಗಳು ಶ್ವಾಸಕೋಶಗಳು ಚುರುಕಾಗುತ್ತವೆ.

ಕಲ್ಲಂಗಡಿ ಬೀಜ, ಗಸಗಸೆ, ಬಾದಾಮಿಯನ್ನು ಚೆನ್ನಾಗಿ ಅರೆದು ಹಾಲು ಮತ್ತು ಕಲ್ಲು ಸಕ್ಕರೆಯ ಜೊತೆ ಬೆರೆಸಿ ಕುಡಿಯುವುದರಿಂದ ದೇಹಕ್ಕೆ ತಂಪಾಗುವುದು ಹಾಗೆಯೇ ಹೃದಯದ ಕ್ರಿಯೆಗಳು ಚುರುಕಾಗುತ್ತವೆ.

ಮಾವಿನಕಾಯಿಯ ಕಾಲದಲ್ಲಿ ಮಾವಿನ ಹಣ್ಣನ್ನು ತಿನ್ನುವುದರಿಂದ ಹೃದಯ ಚಲನೆ ಚುರುಕಾಗಿ ಆರೋಗ್ಯವಾಗಿರುತ್ತದೆ, ಹಾಗಾಗಿ ಶ್ವಾಸಕೋಶದ ಆರೋಗ್ಯಕ್ಕೆ ಯೋಗ ಮಾಡುವುದು ಉತ್ತಮ, ಹೃದಯದ ಕಾಯಿಲೆ ದೂರವಾಗಬೇಕಾದರೆ ಹಾಲನ್ನು ಸೇವಿಸಬೇಕು ತುಪ್ಪವನ್ನು ಅತಿಯಾಗಿ ಸೇವಿಸಬಾರದು, ಹಸಿ ತರಕಾರಿಗಳು ತಾಜಾ ಹಣ್ಣುಗಳು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.

ಗಮನಿಸಿ: ಹೃದಯಕ್ಕೆ ಜಿಡ್ಡು ತುಂಬಾ ಹಾನಿಕರ ಎಣ್ಣೆಯನ್ನು ಮಿತವಾಗಿ ಬಳಸಬೇಕು ಆಗಲೇ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

LEAVE A REPLY

Please enter your comment!
Please enter your name here